Close

ಕೃಷಿ

ಕೃಷಿ ಕರ್ನಾಟಕದಲ್ಲ್ಲಿಶತಮಾನಗಳ ಹಿಂದಿನಿಂದಲೂ,ಇಂದಿಗೂ ರಾಜ್ಯದ ಬಹುಪಾಲು ಜನರ ಮೂಲ ಕಸುಬು. ರಾಜ್ಯದ ಬಹುಪಾಲು ಜನರ ಜೀವನೋಪಾಯವಾಗಿ ಮುಂದುವರೆದಿರುವ ಕೃಷಿ ಕ್ಷೇತ್ರ; ನಮ್ಮ ಜನರ ಆಲೋಚನೆ ಪರಿಕಲ್ಪನೆ ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಹೆಚ್ಹಿನ ಪರಿಣಾಮ ಬೀರಿದೆ. “ಕೃಷಿತೋ ನಾಸ್ತಿ ದುರ್ಭಿಕ್ಷಂ” -ನಂತೆ ನಮ್ಮ ನಾಡಿನ ರೈತಸಮುದಾಯವು ಇಂದಿಗೂ ಕೃಷಿಯ ಬಗ್ಗೆ ಜಾಗೃತವಾಗಿದ್ದು, ಕೃಷಿ ವೃತ್ತಿಯ ಬಗ್ಗೆ ಗೌರವ, ಕಾಳಜಿ ಮುಂದುವರೆದಿದೆ.

ರೈತ ಸಂಪರ್ಕ ಕೇಂದ್ರ

ಬೇಡಿಕೆ ಆಧಾರಿತ ಹೊಸ ಕೃಷಿ ವಿಸ್ತರಣಾ ವ್ಯವಸ್ಥೆಯಾಗಿ “ರೈತ ಮಿತ್ರ ಯೋಜನೆ” ಯನ್ನು ರಾಜ್ಯದಲ್ಲಿ 2000-01ನೇ ಸಾಲಿನಿಂದ ಅನುಷ್ಟ್ಹಾನಗೊಳಿಸಲಾಗುತ್ತಿದೆ.ಈ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಹೋಬಳಿಗೆ ಒಂದರಂತೆ ಪ್ರಾರಂಭಿಸಿರುವ ಕೃಷಿ ವಿಸ್ತರಣಾ ಕೇಂದ್ರಗಳನ್ನು “ರೈತ ಸಂಪರ್ಕ ಕೇಂದ್ರಗಳು” ಎಂದು ಕರೆಯಲಾಗುತ್ತಿದೆ.ರಾಜ್ಯದಲ್ಲಿ ಪ್ರಸ್ತುತ 740ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕೆಳಗಿನ ವೆಬ್ಸೈಟ್ ಲಿಂಕ್ ಅನ್ನು ಕಂಡುಹಿಡಿಯಿರಿ.

http://raitamitra.kar.nic.in/ENG/index.asp